ನೇತಾಜಿ ಸುಭಾಸ್ಚಂದ್ರ ಬೋಸ್ರ ಆದರ್ಶ ರೂಢಿಸಿಕೊಳ್ಳಿ: ಶಾಸಕ ಅಭಯಚಂದ್ರ ಜೈನ್
ಮುಲ್ಕಿ, ಜ.23: ನೇತಾಜಿ ಸುಬಾಸ್ಚಂದ್ರ ಬೋಸ್ ಅವರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಅವರು ನಮಗೆಲ್ಲಾ ಆದರ್ಶಪ್ರಾಯರಾಗಿದ್ದಾರೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ನೇತಾಜಿ ಸುಭಾಸ್ಚಂದ್ರ ಬೋಸ್ ಅವರ 120ನೆ ಜನ್ಮ ದಿನಾಚರಣೆ ಅಂಗವಾಗಿ ಸೋಮವಾರ ಮುಲ್ಕಿಯ ಕೆ.ಎಸ್. ರಾವ್ ನಗರದಿಂದ ಕೆಂಚನಕೆರೆವರೆಗಿಗ ರಸ್ತೆಯನ್ನು ನೇತಾಜಿ ಸುಭಾಸ್ಚಂದ್ರ ಬೋಸ್ ಎಂದು ನಾಮಕರಣಗೊಳಿಸಿ ನಾಮಪಲಕ ಅನಾವರಣಗೊಳಿದ ಬಳಿಕ ನೇತಾಜಿ ಸುಭಾಸ್ಚಂದ್ರ ಬೋಸ್ ಸ್ಮಾರಕ ಅಂನವಾಡಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ವೇಳೆ ನಾಮಫಲಕ ನಿರ್ಮಿಸಿಕೊಟ್ಟ ಆಕೃತಿ ಪ್ರೆಂಡ್ಸ್ ಪರವಾಗಿ ಅಧ್ಯಕ್ಷ ಲತೀಶ್ ಅವರನ್ನು ಶಾಸಕರು ಸನ್ಮಾನಿಸಿದರು. ಮುಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯ ಶೈಲೇಶ್, ಡಾ. ಹರಿಪ್ರಸಾದ್ ಶೆಟ್ಟಿ, ಮುಖಂಡರಾದ ಆಸಿಫ್ ಬಿ.ಎಮ್., ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮಂಜುನಾಥ ಕಂಬಾರ, ಬಶೀರ್ ಕುಳಾಯಿ, ಜನಾರ್ಧನ ಬಂಗೇರ, ವಸಂತ ಸುವರ್ಣ, ಜೀವನ್ ಪೂಜಾರಿ, ಇದಿನಬ್ಬ, ಶಾಂತಾ ಕಿರೋಡಿಯನ್, ಸುಮತಿ, ಸುಜಯಾ, ಶರೀಫ್, ಭೀಮಶಂಕರ್ ಮತ್ತಿತರರು ಉಪಸ್ಥಿತರಿದ್ದರು.