ಸುಳ್ಯ : ವೈದ್ಯಕೀಯ ಕಲಿಕೆಯ ನಿರ್ಗಮನ ಪರೀಕ್ಷೆ ಮಸೂದೆಗೆ ವಿರೋಧಿಸಿ ಐ.ಎಂ.ಎ.ಯಿಂದ ಪ್ರತಿಭಟನೆ
ಸುಳ್ಯ , ಫೆ.1 : ಎಂ.ಬಿ.ಬಿ.ಎಸ್. ಪದವಿ ಪೂರ್ಣಗೊಳಿಸಿ ಹೊರಬರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಕೆಯ ನಿರ್ಗಮನ ಪರೀಕ್ಷೆಯನ್ನು ಕಡ್ಡಾಯ ಮಾಡುವುದನ್ನು ವಿರೋಧಿಸಿ ಸುಳ್ಯದಲ್ಲಿ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಐ.ಎಂ.ಎ. ಸುಳ್ಯ ಘಟಕದ ಎಲ್ಲಾ ವೈದ್ಯರುಗಳಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಎಂ.ಬಿ.ಬಿ.ಎಸ್. ಪದವಿ ಪೂರ್ಣಗೊಳಿಸಿ ಹೊರಬರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಕೆಯ ನಿರ್ಗಮನ ಪರೀಕ್ಷೆಯನ್ನು ಕಡ್ಡಾಯವೆಂದು ಕೇಂದ್ರ ಸರ್ಕಾರ ಮಸೂದೆಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ ದೇಶದಾದ್ಯಂತ ಐಎಂಎ ಪ್ರತಿಭಟನೆಗೆ ಕರೆ ನೀಡಿದ್ದು, ಅದರಂತೆ ಸುಳ್ಯದಲ್ಲೂ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಎಂ.ಬಿ.ಬಿ.ಎಸ್. ಪ್ರವೇಶ ಹಂತದಿಂದ ಹಿಡಿದು ಪದವಿ ಪೂರ್ಣಗೊಳಿಸುವವರೆಗೂ ಅನೇಕ ರೀತಿಯ ಪರೀಕ್ಷೆಗಳು ಮತ್ತು ಪ್ರಯೋಗಗಳು ಮಾಡಿ ಒಂದು ವರ್ಷ ಇಂಟೆನ್ಶಿಪ್ ಕೂಡ ಆಸ್ಟತ್ರೆಗಳಲ್ಲಿ ಕೆಲಸ ಮಾಡಿ ನಂತರ ಪದವಿ ಪಡೆದುಕೊಳ್ಳತ್ತಾರೆ. ಆದರೆ ಈ ನಿರ್ಗಮನ ಪರೀಕ್ಷೆ ವೈದ್ಯಕೀಯ ತರಬೇತಿಯ ಸಮಯವನ್ನು ಇನ್ನು ಹೆಚ್ಚಾಗಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಐ.ಎಂ.ಎ. ಸುಳ್ಯ ಘಟಕದ ಕಾರ್ಯದರ್ಶಿ ಡಾ.ಗೀತಾ ದೊಪ್ಪಮತ್ತು ಖಜಾಂಜಿ ಡಾ.ನವ್ಯ ಮಾತನಾಡಿದರು.
ಈ ನಿರ್ಗಮನ ಪರೀಕ್ಷೆಯ ಮಸೂದೆಯನ್ನು ಜಾರಿಗೊಳಿಸುವು ಬೇಡ ಎಂದು ಅಹವಾಲನ್ನು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ನೀಡಿದರು.
ಡಾ.ರವಿಕಾಂತ್, ಡಾ.ಶಿವಣ್ಣ ಗೌಡ, ಡಾ.ರಂಗನಾಥ, ಡಾ.ರವಿಶಂಕರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.