ಮೂಡುಬಿದಿರೆ:ಭಕ್ತಿ ಸಂಧ್ಯಾ ಕಾರ್ಯಕ್ರಮ
ಮೂಡುಬಿದಿರೆ, ಫೆ.16: ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಾಂಗಣದಲ್ಲಿ ಅಂಗಾರಕೀ ಸಂಕಷ್ಟ ಚತುರ್ಥಿಯ ದಿನವಾದ ಮಂಗಳವಾರ ರಾತ್ರಿ ಭಕ್ತಿ ಸಂಧ್ಯಾ ಕಾರ್ಯಕ್ರಮ ನಡೆಯಿತು.
ಖ್ಯಾತ ಸಂಗೀತ ಗಾಯಕ ಶಂಕರ್ ಶ್ಯಾನುಭೋಗ್ ಅವರಿಂದ ಗಾಯನ ನಡೆಯಿತು. ಎಂ. ಮನೋಹರ ದೇವದಾಸ ಮಲ್ಯ ಸಹೋದರರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಾರ್ಮೊನಿಯಂನಲ್ಲಿ ಉಡುಪಿಯ ಶಂಕರ್ ಶೆಣೈ, ತಬ್ಲಾದಲ್ಲಿ ಸ್ಥಳೀಯ ವಿಘ್ನೇಶ್ ಪ್ರಭು, ವೆಂಕಟೇಶ್ ಮಲ್ಯ ತಾಲ್ ನಲ್ಲಿ ಸಹಕರಿಸಿದರು. ವೆಂಕಟೇಶ್ ಕಾಮತ್ ನಿರೂಪಿಸಿ ವಂದಿಸಿದರು.
Next Story