ವಿದ್ಯಾರ್ಥಿನಿಯರಿಗೆ ಸಂಘಪರಿವಾರ ಕಾರ್ಯಕರ್ತರಿಂದ ಬೆದರಿಕೆ: ಉದ್ವಿಗ್ನ
ಕಡಬ, ೆ.21: ವಿದ್ಯಾರ್ಥಿನಿಯ ಮನೆಯಲ್ಲಿ ಆಕೆಯ ಸ್ನೇಹಿತೆಯರಾದ ವಿದ್ಯಾರ್ಥಿನಿಯರಿದ್ದ ವಿಚಾರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮನೆಗೆ ಮುತ್ತಿಗೆ ನಡೆಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಕೊಲ ಗ್ರಾಮದ ಗೋಕುಲನಗರ ಸಮೀಪ ಮಂಗಳವಾರ ಸಾಯಂಕಾಲ ನಡೆದಿದೆ. ಪೊಲೀಸರ ಸಕಾಲ ಆಗಮನದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದು ಬಂದಿದೆ. ಮೈಸೂರಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿನಿಯ ಗೋಕುಲನಗರದ ಜನತಾಕಾಲನಿಯಲ್ಲಿರುವ ಮನೆಗೆ ಈಕೆಯ ಸಹಪಾಠಿಗಳಾದ ಕಲಬುರಗಿ, ಹೈದರಬಾದ್ ಮತ್ತು ಮುಂಬೈ ಮೂಲದ ಮೂವರು ವಿದ್ಯಾರ್ಥಿನಿಯರು ಸೋಮವಾರ ಸಾಯಂಕಾಲ ಆಗಮಿಸಿದ್ದರೆನ್ನಲಾಗಿದೆ.
ಪರಿಸರದಲ್ಲಿ ಇವರೆಲ್ಲರು ಸುತ್ತಾಡಿದ್ದನ್ನು ಗಮನಿಸಿದ ಸಂಘ ಪರಿವಾರದ ಕಾರ್ಯಕರ್ತರು ಈ ಬಗ್ಗೆ ಪ್ರಶ್ನಿಸಿದ್ದಾರೆನ್ನಲಾಗಿದೆೆ. ಈ ಸಂದರ್ಭ ಸ್ಥಳದಲ್ಲಿ ಜನ ಜಮಾಯಿಸಿ ಗೊಂದಲದ ವಾತಾ ವರಣ ನಿರ್ಮಾಣವಾಯಿತೆಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಕಡಬ ಹಾಗೂ ಉಪ್ಪಿನಂಗಡಿ ಪೊಲೀಸರು ವಿದ್ಯಾ ರ್ಥಿನಿಯರನ್ನು ವಿಚಾರಣೆ ನಡೆಸಿ, ವಿದ್ಯಾರ್ಥಿನಿಯರ ಪೋಷ ಕರನ್ನು ಸಂಪರ್ಕಸಿದ್ದಾರೆನ್ನಲಾಗಿದೆ. ಪೋಷಕರ ಅನುಮತಿ ಪಡೆದೇ ಆಗಮಿಸಿದ ವಿದ್ಯಾರ್ಥಿನಿಯರು ಈ ಹಿಂದೆಯೂ ಹಲವಾರು ಬಾರಿ ಈ ಮನೆಗೆ ಆಗಮಿಸಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಮನೆಯೊಳಗೆ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಮನೆಯ ಹೊರಗಡೆ ಎರಡೂ ಕೋಮಿನ ನೂರಾರು ಜಮಾಯಿಸಿದ್ದು, ಇವರ ನಡುವೆ ವಾಗ್ವಾದ ನಡೆಯಿತು ಎನ್ನಲಾಗಿದೆ. ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿನಿಯರನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿವೈಎಸ್ಪಿ ಭಾಸ್ಕರ್, ಪುತ್ತೂರು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.