ಕೊಯಿಲ ಕೋಮುಗಲಭೆ ಯತ್ನ: ಆರೋಪಿಗಳಿಗೆ ಜಾಮೀನು
ಉಪ್ಪಿನಂಗಡಿ, ಫೆ.22: ಮಂಗಳವಾರ ಇಲ್ಲಿನ ಸಮೀಪದ ಕೊಯಿಲ ಜನತಾ ಕಾಲೋನಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಜೊತೆಗೆ ಆಕೆಯ ಹಿಂದೂ ಗೆಳತಿಯರು ಮನೆಗೆ ಬಂದಿರುವುದನ್ನು ಖಂಡಿಸಿ ಕೋಮುಗಲಭೆಗೆ ಪ್ರಯತ್ನಿಸುತಿದ್ದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇದೀಗ ಆರೋಪಿಗಳಾದ ಸಿರಾಜ್, ಬಶೀರ್, ಅರಾಫತ್, ಶರೀಫ್, ತೌಸೀಫ್ ಪುತ್ತೂರಿನ ಎಸಿಜೆ & ಜೆಎಂಎಫ್ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾರೆ.
ಘಟನೆಯ ಹಿನ್ನೆಲೆ:
ಜನತಾ ಕಾಲೋನಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯ ಜೊತೆಗೆ ಆಕೆಯ ಹಿಂದೂ ಗೆಳತಿಯರು ಮನೆಗೆ ಬಂದಿರುವುದನ್ನುವಿರೋಧಿಸಿದ್ದ ಸಂಘ ಪರಿವಾರದ ಕೆಲವರು ಮನೆಯೊಳಗೆ ಅತಿಕ್ರಮಣ ಪ್ರವೇಶಿಸಿ ದಾಂಧಲೆ ಮಾಡಿದ್ದರು.
ಈ ಕೃತ್ಯವನ್ನು ವಿರೋಧಿಸಿ ಮುಸ್ಲಿಂ ಸಮುದಾಯದ ಯುವಕರು ಕೂಡಾ ಗುಂಪು ಸೇರಿದ್ದು ಅಲ್ಲಿ ಇತ್ತಂಡಗಳ ನಡುವೆ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿ ಜಿಲ್ಲಾ ವರಿಷ್ಟಾಧಿಕಾರಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.
ಈ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇತ್ತಂಡಗಳ ವಿರುದ್ದ ಪ್ರಕರಣ ದಾಖಲಿಸಿದ್ದು, ಸಿರಾಜ್, ಬಶೀರ್, ಅರಾಫತ್, ಶರೀಫ್, ತೌಸೀಫ್ ಬಂದಿಸಿದ್ದರು.
ಆರೋಪಿಗಳ ಪರವಾಗಿ ವಕೀಲರಾದ ಅಬ್ದುಲ್ ಮಜೀದ್ ಖಾನ್, ಇಬ್ರಾಹಿಂ ಬಾತಿಷ್ ಯು.ಕೆ., ಖಲಂದರ್ ಕೊಯಿಲ, ಸೈಪುದ್ದೀನ್ ಆತೂರು , ರಹಿಮಾನ್ ಬಂಡಾಡಿ ವಾದಿಸಿದರು.