ಪುತ್ತೂರು: ಚಿದಾನಂದ ಕಾಮತ್ಗೆ 'ಮಕ್ಕಳ ಮನದ ನಕ್ಷತ್ರ' ಪುರಸ್ಕಾರ
ಪುತ್ತೂರು, ಫೆ.25: ಕಳೆದ ಹಲವಾರು ವರ್ಷಗಳಿಂದ ಬಾರಿಸು ಕನ್ನಡ ಡಿಂಡಿಮವ ಎಂಬ ಹೆಸರಿನಲ್ಲಿ ಮಕ್ಕಳಿಗೆ ಕಲಾ ವೇದಿಕೆ ನೀಡುತ್ತಿರುವ ರಂಗಕಲಾವಿದ ಚಿದಾನಂದ ಕಾಮತ್ ಕಾಸರಗೋಡು ಅವರಿಗೆ ಸ್ನೇಹ ಸಂಗಮ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ 'ಮಕ್ಕಳ ಮನದ ನಕ್ಷತ್ರ' ಪುರಸ್ಕಾರ ನೀಡಿ ಗೌರವಿಸಲಾಯಿತು.
ಶನಿವಾರ ಪುತ್ತೂರು ನೆಲ್ಲಿಕಟ್ಟೆ ಶಾಲಾ ಸಭಾಂಗಣದಲ್ಲಿ ನಡೆದ ಸ್ನೇಹ ಸಂಗಮ ಅಟೋರಿಕ್ಷಾ ಚಾಲಕ ಮಾಲಕರ ಸಂಘದ 20ನೇ ವಾರ್ಷಿಕ ಮಹಾಸಭೆಯು ಗೌರವ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಫೆಲಿಕ್ಸ್ ಡಿಸೋಜ ಉದ್ಘಾಟಿಸಿದರು.
ಅತಿಥಿಗಳಾಗಿ ಈಶ್ವರಮಂಗಳ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಪುತ್ತೂರು ಮಾಯ್ದೆ ದೇವುಸ್ ಚರ್ಚ್ನ ಧರ್ಮಗುರು ಆಲ್ಫ್ರೆಡ್ ಜೆ ಪಿಂಟೋ, ಪುತ್ತೂರು ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಓಮನ ಶುಭ ಹಾರೈಸಿದರು.
ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ, ನಗರಸಭಾ ಮಾಜಿ ಸದಸ್ಯ ನವೀನ್ ಚಂದ್ರ ನಾಯ್ಕಿ, ಸ್ನೇಹ ಸಂಗಮದ ಸ್ಥಾಪಕ ಅಧ್ಯಕ್ಷ ಸುಧಾಕರ್, ಅಧ್ಯಕ್ಷ ಲೋಕೇಶ್ ಗೌಡ ಉಪಸ್ಥಿತರಿದ್ದರು.
'ಮಕ್ಕಳ ಮನದ ನಕ್ಷತ್ರ' ಪುರಸ್ಕಾರ ಪುರಸ್ಕೃತ ಚಿದಾನಂದ ಕಾಮತ್ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಂಘದ ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ ಸ್ವಾಗತಿಸಿದರು. ಪ್ರಕಾಶ್ ಹಾರಾಡಿ ವರದಿ ವಾಚಿಸಿದರು. ದಿಲೀಪ್ ಮೊಟ್ಟೆತ್ತಡ್ಕ ನಿರೂಪಿಸಿದರು.