ಬೈಂದೂರು: ಡಿಸೇಲ್ ಕುಡಿದು ಮಗು ಮೃತ್ಯು
ಬೈಂದೂರು, ಮಾ.8: ಕಿರಿಮಂಜೇಶ್ವರ ಗ್ರಾಮದ ನಾಗೂರು ಎಂಬಲ್ಲಿ ಡಿಸೇಲ್ ಕುಡಿದು ಅಸ್ವಸ್ಥಗೊಂಡ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ನಾಗೂರಿನ ನಾಗರಾಜ ಎಂಬವರ ಎರಡೂವರೆ ವರ್ಷದ ಶ್ರೇಯಸ್ ಮೃತಪಟ್ಟ ಮಗು. ನಾಗರಾಜ್ ಜ.28ರಂದು ಮಧ್ಯಾಹ್ನ ನಾಗೂರಿನಲ್ಲಿರುವ ಪತ್ನಿಯ ಮನೆಯಲ್ಲಿ ತನ್ನ ರಿಕ್ಷಾ ನಿಲ್ಲಿಸಿದ್ದು, ಅದರಲ್ಲಿದ್ದ ಡಿಸೇಲ್ ತುಂಬಿದ ಬಾಟಲಿಯಿಂದ ಮಗು ತಿಳಿಯದೆ ಕುಡಿದು ಅಸ್ವಸ್ಥಗೊಂಡಿತ್ತು.
ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೇಯಸ್ ಮಾ.7ರಂದು ರಾತ್ರಿ 10ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟನು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story