ಜೀವ ಬೆದರಿಕೆ : ಆರೋಪಿಗಳ ಸೆರೆ
ಕೊಣಾಜೆ,ಮಾ.30: ಕ್ಷುಲ್ಲಕ ಕಾರಣಕ್ಕಾಗಿ ಯುವಕರಿಬ್ಬರು ಸೆಲೂನ್ ಮಾಲೀಕನಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಪಾವೂರು ಗ್ರಾಮದ ಮಲಾರ್ ಅರಸ್ತಾನ ನಿವಾಸಿಗಳಾದ ಹಂಝ ಮತ್ತು ಫೈಝಲ್ ಬಂಧಿತರು. ಬುಧವಾರ ಬೆಳಗ್ಗೆ ಮಲಾರ್ ಜಂಕ್ಷನ್ನಲ್ಲಿರುವ ಸೆಲೂನ್ಗೆ ಆರೋಪಿಗಳಿಬ್ಬರು ಬಂದಿದ್ದರು. ಆ ಸಂದರ್ಭ ಬಾಗಿಲು ಹಾಕಿದ್ದರಿಂದ ಆಕ್ರೋಶಿತರಾದ ಆರೋಪಿಗಳು ಮಾಲೀಕ ಗೋವಿಂದರಾಜ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಗೋವಿಂದರಾಜ್ ಹಾಗೂ ಉಳ್ಳಾಲ ವಲಯ ಬಾರ್ಬರ್ಸ್ ಅಸೋಸಿಯೇಶನ್ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Next Story