ಸುಳ್ಯ ಎಪಿಎಂಸಿ ಚುನಾವಣೆ: 45 ನಾಮಪತ್ರ ಸಲ್ಲಿಕೆ
ಸುಳ್ಯ, ಎ.12: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಎ.25 ರಂದು ನಡೆಯಲಿರುವ ಚುನಾವಣೆಗೆ ಒಟ್ಟು 45 ನಾಮಪತ್ರಗಳು ಸಲ್ಲಿಕೆಯಾಗಿದೆ.
ಎಪಿಎಂಸಿಗೆ ಒಟ್ಟು 13 ಕ್ಷೇತ್ರಗಳಿದ್ದು, ಅದರಲ್ಲಿ 11 ಕೃಷಿಕರ ಕ್ಷೇತ್ರ, ಒಂದು ವರ್ತಕ ಮತ್ತು ಒಂದು ಸಹಕಾರಿ ಕ್ಷೇತ್ರವಿದೆ. ಸುಬ್ರಹ್ಮಣ್ಯ ಕ್ಷೇತ್ರದಿಂದ ರಮೇಶ್ ಕೆ.ಎಚ್., ಬಾಲಕೃಷ್ಣ ಮತ್ತು ಬಾಲಕೃಷ್ಣ ಎಂ.. ದೇವಚಳ್ಳ ಕ್ಷೇತ್ರದಿಂದ ವಿನಯಕುಮಾರ್ ಮುಳುಗಾಡು, ಜಿ.ಚಂದ್ರಶೇಖರ, ತಿಮ್ಮಪ್ಪ ಗೌಡ, ಜಯರಾಮ್ ಹಾಡಿಕಲ್ಲು. ಗುತ್ತಿಗಾರು ಕ್ಷೇತ್ರದಿಂದ ಜಯಲಕ್ಷಿ್ಮ ೀ, ಶಶಿಕಲಾ ಡಿ.ಪಿ., ಜಾಲ್ಸೂರು ಕ್ಷೇತ್ರದಿಂದ ದೇರಣ್ಣ ಗೌಡ ಅಡ್ಡಂತ್ತಡ್ಕ, ಹೇಮಚಂದ್ರ, ತೇಜಪ್ರಕಾಶ್, ಎನ್.ಪುರುಷೋತ್ತಮ, ಸುಳ್ಯ ಕ್ಷೇತ್ರದಿಂದ ಕೆ.ಗೋಕುಲ್ದಾಸ್, ರಾಧಾಕೃಷ್ಣ ಎನ್., ಪಿ.ಎಸ್.ಗಂಗಾಧರ, ಜಯಪ್ರಕಾಶ್ ಕುಂಚಡ್ಕ. ಎಡಮಂಗಲ ಕ್ಷೇತ್ರದಿಂದ ರಮೇಶ್ ಕೋಟೆ, ಲೋಕೇಶ್ ಅಕ್ರಿಕಟ್ಟೆ, ಸಂತೋಷ್ ಜಾಕೆ. ಬೆಳ್ಳಾರೆ ಕ್ಷೇತ್ರದಿಂದ ಮೋಹನ್ ಸಾಲ್ಯಾನ್, ಪಿ.ಅಬ್ಬಾಸ್, ಎಸ್.ಎಸ್. ಡಿ. ವಿಠಲದಾಸ್, ನವೀನ್ಕುಮಾರ್ ಎಸ್., ಅಮರಮುಡ್ನೂರು ಕ್ಷೇತ್ರದಿಂದ ಸುಕನ್ಯ. ಕೆ.ಭಟ್, ಪ್ರೇಮಾವತಿ, ಅಜ್ಜಾವರ ಕ್ಷೇತ್ರದಿಂದ ಗೋಪಾಲ, ಮೋಹನ್, ಸುಂದರ ನೆಹರೂನಗರ. ಐವತ್ತೊಕ್ಲು ಕ್ಷೇತ್ರದಿಂದ ಸುಬ್ರಹ್ಮಣ್ಯ ಕುಳ, ಲಕ್ಷ್ಮಣ ಗೌಡ, ಚಂದ್ರಶೇಖರ, ಮೋನಪ್ಪ ಗೌಡ. ಅರಂತೋಡು ಕ್ಷೇತ್ರದಿಂದ ಕೇಶವಪ್ರಸಾದ್ ತೋಡಿಕಾನ, ಕುಸುಮಾಧರ ಅಡ್ಕಬಳೆ, ದಯಾನಂದ ಕುರುಂಜಿ, ದೀಪಕ್ ಕುತ್ತಮೊಟ್ಟೆ. ವರ್ತಕರ ಕ್ಷೇತ್ರದಿಂದ ಶಾಹುಲ್ ಹಮೀದ್, ಆದಂ ಕುಂಞಿ, ಕೆ.ಸೋಮನಾಥ ಪೂಜಾರಿ, ಅಬ್ದುಲ್ ಬಶೀರ್, ಅಬೂಬಕರ್ ಸಿದ್ದೀಕ್. ಸಹಕಾರಿ ಕ್ಷೇತ್ರದಿಂದ ಕೆ.ಎಸ್.ಗಣೇಶ್ ಮತ್ತು ಆನಂದ ಕಂಬಾರೆ ನಾಮಪತ್ರ ಸಲ್ಲಿಸಿದ್ದಾರೆ. ಎ.13ರಂದು ನಾಮಪತ್ರ ಪರಿಶೀಲನೆ ಹಾಗೂ ಎ.15 ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನವಾಗಿದೆ. ಎ.25ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದ್ದು, ಎ.27ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಸುಳ್ಯ ಎಸಿಎಫ್ ಎನ್.ಎಚ್.ಜಗನ್ನಾಥ್ ಮತ್ತು ಸಹಾಯಕ ಅಧಿಕಾರಿಯಾಗಿ ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ಕಾರ್ಯ ನಿರ್ವಹಿಸುತ್ತಿದ್ದಾರೆ.