ಕಡಂಬು: ಎ.24ರಂದು ತಾಜುಲ್ ಉಲಮಾ ಅನುಸ್ಮರಣೆ
ಬಂಟ್ವಾಳ, ಎ.21: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಎಸ್ವೈಎಸ್ ವಿಟ್ಲ ಸೆಂಟರ್, ಎಸ್ವೈಎಸ್ ಹಾಗೂ ಎಸ್ಸೆಸ್ಸೆಫ್ ಕಡಂಬು ಶಾಖೆಯ ಸಹಭಾಗಿತ್ವದಲ್ಲಿ ಸೆಂಟರ್ ಸಮ್ಮೇಳನ ಹಾಗೂ ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಎ.24ರಂದು ಕಡಂಬುವಿನಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎ.ಹಮೀದ್ ಕೊಡಂಗಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್ವೈಎಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಸಿ.ಎಚ್.ಮುಹಮ್ಮದಲಿ ಸಖಾಫಿ ಕಾರ್ಯಕ್ರಮ ಉದ್ಘಾಟಿಸುವರು. ವಿಟ್ಲ ಸೆಂಟರ್ ಎಸ್ವೈಎಸ್ ಅಧ್ಯಕ್ಷ ಕೆ.ಎಂ.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ನೌಫಲ್ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ. ಅಸ್ಸೈಯದ್ ಶಿಹಾಬುದ್ದೀನ್ ಸಖಾಫಿ ತಂಙಳ್ ಅಲ್ ಹೈದ್ರೋಸಿ ಕಿಲ್ಲೂರು ದುಆಗೈಯುವರು.
ಎ.23ರಂದು ಕೊಡಂಗಾಯಿ ದಾರುನ್ನಜಾತ್ ಎಜ್ಯುಕೇಶನಲ್ ಸೆಂಟರ್ನಲ್ಲಿ ಎಸ್ವೈಎಸ್ ವತಿಯಿಂದ ಸಂಘಟನೆ ಬಗ್ಗೆ ತರಬೇತಿ ಕಾರ್ಯ ನಡೆಯಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ಸೆಂಟರ್ ಎಸ್ವೈಎಸ್ ಅಧ್ಯಕ್ಷ ಕೆ.ಎಂ.ಅಬ್ದುಲ್ ಹಮೀದ್, ಎಸ್.ಎಂ.ಎ.ಉಪಾಧ್ಯಕ್ಷ ಉಮರ್ ಬಾಕಿಮಾರ್, ಕಡಂಬು ಎಸ್ವೈಎಸ್ ಅಧ್ಯಕ್ಷ ಅಬೂಬಕರ್ ಕಡಂಬು ಉಪಸ್ಥಿತರಿದ್ದರು.