ಮೇ 1ಕ್ಕೆ ಪ್ರೊ.ಬಿ.ವಿ.ಆಚಾರ್ಯ ಕೃತಿ ಬಿಡುಗಡೆ
ಉಡುಪಿ, ಎ.25: ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘ ಹಾಗೂ ಯಕ್ಷಗಾನ ಕಲಾರಂಗ ಉಡುಪಿ ಇವುಗಳ ಜಂಟಿ ಸಹಯೋಗದಲ್ಲಿ ಪ್ರೊ.ಬಿ.ವಿ. ಆಚಾರ್ಯರ ಬದುಕು-ಸಾಧನೆಗಳ ಕಥನ ‘ಸೇವಾಸಿಂಧು’ ಕೃತಿ ಮೇ 1ರಂದು ಸಂಜೆ 5ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ಬಿಡುಗಡೆಗೊಳ್ಳಲಿದೆ.
ಮಣಿಪಾಲ ವಿವಿಯ ಮಾಜಿ ಉಪಕುಲಪತಿ ಹಾಗೂ ಖ್ಯಾತ ವೈದ್ಯ ಡಾ. ಬಿ.ಎಂ.ಹೆಗ್ಡೆಯವರು ಎಚ್.ಮಂಜುನಾಥ ಭಟ್ ಸಂಪಾದಕತ್ವದ ಕೃತಿಯನ್ನು ಬಿಡುಗಡೆಗೊಳಿಸುವರು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story