ಕುಡಿಯಲು ನೀರು ಕೇಳಿ ಸರ ಎಳೆದು ಪರಾರಿಯಾದರು!
ಮಣಿಪಾಲ, ಮೇ 7: ಕುಡಿಯಲು ನೀರು ಕೇಳುವ ನೆಪದಲ್ಲಿ ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಘಟನೆ 80 ಬಡಗುಬೆಟ್ಟುವಿನಲ್ಲಿ ನಡೆದಿದೆ.
ಬಡಗುಬೆಟ್ಟು ಗ್ರಾಮದ ಸ್ಥಾನದ ಬಾಕ್ಯಾರ ಎಂಬಲ್ಲಿ ಬೂದು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಇಲ್ಲಿನ ಗೋಪಾಲಕೃಷ್ಣ ನಿಲಯದ ಸುಜಾತ ಪಿ.ನಾಯಕ್ರಲ್ಲಿ "ಬಾಯಾರಿಕೆಯಾಗಿದೆ ಕುಡಿಯಲು ನೀರು ಕೊಡಿ ಅಕ್ಕಾ" ಎಂದು ಕೇಳಿದ್ದಾರೆ. ಸುಜಾತಾ ನಾಯಕ್ ಅವರು ನೀರು ಕೊಟ್ಟು ಹಿಂದಕ್ಕೆ ಹೋಗುವಾಗ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಕರಿಮಣಿ ಸರದ ಅಂದಾಜು ಮೌಲ್ಯ 50,000ರೂ. ಎಂದು ಹೇಳಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story