ಜೂ.9ರಿಂದ 12: ಜೆಪ್ಪುವಿನಲ್ಲಿ ಆಧಾರ್ ನೋಂದಣಿ ಅಭಿಯಾನ
ಮಂಗಳೂರು, ಜೂ.8: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ನೇತೃತ್ವದಲ್ಲಿ ಆಧಾರ್ ಕಾರ್ಡ್ ನೋಂದಣಿ ಅಭಿಯಾನವು ಜೂ.9ರಿಂದ 12ರವರೆಗೆ ಜೆಪ್ಪುವಿನ ಶಾಂತಿನಗರದ ಮಂಗಳೂರು ಸ್ಟೋರ್ ಬಳಿಯಿರುವ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮುಖ್ಯ ಸಚೇತಕರ ಕಚೇರಿ ಪ್ರಕಟನೆ ತಿಳಿಸಿದೆ.
Next Story