ಡಿಸಿಪಿಯಾಗಿ ಹನುಮಂತರಾಯ ಅಧಿಕಾರ ಸ್ವೀಕಾರ
ಮಂಗಳೂರು, ಜೂ. 8: ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರಾಗಿ (ಅಪರಾಧ ಮತ್ತು ಉಸಂಚಾರ) ಹನುಮಂತರಾಯ ಅವರು ಗುರುವಾರ ಕಮಿಷನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಡಿಸಿಪಿಯಾಗಿದ್ದ ಡಾ. ಸಂಜೀವ ಎಂ. ಪಾಟೀಲ್ ರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹನುಮಂತರಾಯ ರನ್ನು ನೇಮಕ ಮಾಡಲಾಗಿದೆ. ಹನುಮಂತರಾಯ ಅವರು ಈ ಹಿಂದೆ ಕೆಪಿಸಿಎಲ್ನಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
Next Story