ರಾಹುಲ್ ಗಾಂಧಿಯ ಜನ್ಮ ದಿನಾಚರಣೆ
ಮಂಗಳೂರು, ಜೂ.20: ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ವತಿಯಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ 46ನೆ ಜನ್ಮದಿನವನ್ನು ಅಸೈಗೋಳಿಯ ಅಭಯಾಶ್ರಮದಲ್ಲಿನ ಅನಾಥ ಮಕ್ಕಳು ಮಾತು ವೃದ್ಧರಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.
ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಾಧ್ಯಕ್ಷ ರವೂಫ್ ಸಿ ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಇಲ್ಯಾಸ್, ಪ್ರಧಾನ ಕಾರ್ಯದರ್ಶಿ ಕಿರಣ್ ಪೂಜಾರಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಗ್ರಾಪಂ ಸದಸ್ಯರಾದ ವಿನೂ ಶೆಟ್ಟಿ ತಲಪಾಡಿ, ವೈಭವ್ ಶೆಟ್ಟಿ, ಮುಹಮ್ಮದ್, ಅಬೂಬಕರ್, ಫಯಾಝ್ ಮೊಂಟೆಪದವು ಉಪಸ್ಥಿತರಿದ್ದರು
Next Story