ಯುವಕ ನಾಪತ್ತೆ
ಕಾರ್ಕಳ, ಜು.3: ಬೋಳಾ ಗ್ರಾಮದ ವಂಜಾರಕಟ್ಟೆ ಕೆರೆಕೋಡಿಯ ವಾಸು ಮೂಲ್ಯ ಎಂಬವರ ಪುತ್ರ ಸುರೇಂದ್ರ(26) ಎಂಬವರು ಜು.2ರಂದು ಬೆಳಗ್ಗೆ ಮನೆಯಿಂದ ಚಾಲಕ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.
5.6 ಎತ್ತರ, ಸಪೂರ ಶರೀರ, ಕೂಲು ಮುಖ, ಗುಂಗುರ ಕೂದಲು, ಎಣ್ಣೆ ಕಪ್ಪುಮೈಬಣ್ಣ ಹೊಂದಿರುವ ಇವರು ಬಿಳಿ ಕಪ್ಪುಚುಕ್ಕೆಯಿರುವ ತುಂಬು ತೋಳಿನ ಶರ್ಟ್ ಮತ್ತು ಕಪ್ಪುಜೀನ್ಸ್ ಫ್ಯಾಂಟ್ ಧರಿಸಿದ್ದರು.
ಕನ್ನಡ ತುಳು, ಹಿಂದಿ, ಇಂಗ್ಲೀಷ್ ಮಾತನಾಡುತ್ತಾರೆ. ಬಲಗೈಯ ನಾಲ್ಕು ಬೆರಳುಗಳ ತುದಿ ತುಂಡಾಗಿರುತ್ತದೆ. ಸಪೂರ ಮೀಸೆ ಕುರುಚಲು ಗಡ್ಡ ಇದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story