ಗುರುಪುರ ಕೈಕಂಬ: ಆ.18ರಂದು ಎಸ್.ಡಿ.ಪಿ.ಐ.ಯಿಂದ ಸಾರ್ವಜನಿಕ ಸಮಾವೇಶ
ಮಂಗಳೂರು, ಆ.17: ಎಸ್.ಡಿ.ಪಿ.ಐ. ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಗುಂಪು ಹಿಂಸಾ ಹತ್ಯೆಯ ವಿರುದ್ಧ ಅಭಿಯಾನದ ಅಂಗವಾಗಿ ಆ.18ರಂದು ಗುರುಪುರ ಕೈಕಂಬ ಜಂಕ್ಷನ್ನಲ್ಲಿ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಭಾಷಣಕಾರರಾಗಿ ಎಸ್.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ಭಾಗವಹಿಸುವರು. ಎಸ್.ಡಿ.ಪಿ.ಐ. ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಮಾಲ್ ಜೋಕಟ್ಟೆ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಪಿ.ಎಫ್.ಐ. ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ಇಕ್ಬಾಲ್ ನಂದರಬೆಟ್ಟು, ಉಡುಪಿಯ ಕ್ರೈಸ್ತ ಧರ್ಮಗುರು ಫಾ.ವಿಲಿಯಮ್ ಮಾರ್ಟಿಸ್, ಅಹಿಂದ ಪರ ಹೋರಾಟಗಾರರಾದ ಸತೀಶ್ ಸಾಲ್ಯಾನ್, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಪಿ.ಎಫ್.ಐ. ದ.ಕ ಜಿಲ್ಲಾಧ್ಯಕ್ಷರಾದ ನವಾಝ್ ಉಳ್ಳಾಲ್, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಪಿ.ಎಫ್.ಐ. ಬಜ್ಪೆವಲಯಾಧ್ಯಕ್ಷ ಎ.ಕೆ.ಅಶ್ರಫ್, ಪಿ.ಎಫ್.ಐ. ಮೂಡುಬಿದಿರೆ ವಲಯಾಧ್ಯಕ್ಷ ಅಬೂಬಕರ್ ಪುತ್ತ ವಾಮಂಜೂರು ಭಾಗವಹಿಸಲಿದ್ದಾರೆ ಎಂದು ಎಸ್.ಡಿ.ಪಿ.ಐ. ಮುಲ್ಕಿ ಮೂಡುಬಿದಿರೆ ಕಾರ್ಯದರ್ಶಿ ನಿಸಾರ್ ಮರವೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.