ಸನಾತನ ಸಂಸ್ಥೆಯಿಂದ ಬೋಧನೆ ಆರೋಪ: ಸಿಎಫ್ಐಯಿಂದ ಶಿಕ್ಷಣಾಧಿಕಾರಿಗೆ ಮನವಿ
ಬೆಳ್ತಂಗಡಿ, ಸೆ. 13: ಇಲ್ಲಿನ ಸರಕಾರಿ ಶಾಲೆಯೊಂದರಲ್ಲಿ ಸನಾತನ ಸಂಸ್ಥೆ ಅನಧಿಕೃತವಾಗಿ ಬೋಧನೆ ಮಾಡುತ್ತಿರುವುದಾಗಿ ಆರೋಪಿಸಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ತಾಲೂಕು ಸಮಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದೆ.
ನೆರಿಯ ಸರಕಾರಿ ಶಾಲೆಯಲ್ಲಿ ಸನಾತನ ಸಂಸ್ಥೆಯೊಂದು ಬೋಧನೆ ಮಾಡುತಿದ್ದು, ಪರೀಕ್ಷಾ ಪ್ರಶ್ನೆ ಪತ್ರಿಕೆ ಹಂಚಿ ಪ್ರತಿ ಶನಿವಾರ ಪರೀಕ್ಷೆ ನಡೆಸುತ್ತಿದೆ. ಇದು ಮಕ್ಕಳಲ್ಲಿ ಮತೀಯ ಭಾವನೆ ಉಂಟು ಮಾಡುವುದರಿಂದ ಈ ಕ್ರಮವನ್ನು ತಕ್ಷಣವೇ ನಿಷೇಧಿಸಬೇಕಾಗಿ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಶಿಕ್ಷಣ ಸಂಸ್ಥೆಯಿಂದ ಅಮಾನತು ಮಾಡಬೇಕು ಎಂದು ಸಿಎಫ್ಐ ಆಗ್ರಹಿಸಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆಂದು ಶಿಕ್ಷಣ ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಸಿಎಫ್ಐ ತಿಳಿಸಿದೆ.
Next Story