ಉಡುಪಿ: ಯುವತಿಗೆ ಹಲ್ಲೆಗೈದು ನಗದು ದೋಚಿದ ದುಷ್ಕರ್ಮಿಗಳ ತಂಡ
ಕುಂದಾಪುರ, ಸೆ. 20: ಯುವತಿಗೆ ದೊಣ್ಣೆಯಿಂದ ಹಲ್ಲೆಗೈದ ದುಷ್ಕರ್ಮಿಗಳ ತಂಡವೊಂದು ಆಕೆಯ ಬಳಿಯಿದ್ದ ನಗದು ದೋಚಿದ ಘಟನೆ ಕುಂದಾಪುರದ ರಟ್ಟಾಡಿ ಎಂಬಲ್ಲಿ ನಡೆದಿದೆ.
ಪ್ರೀತಿ (24) ಎಂಬಾಕೆಗೆ ಮಾರಣಾಂತಿಕವಾಗಿ ಹಲ್ಲೆಗೈದ ದುಷ್ಕರ್ಮಿಗಳ ತಂಡ ನಗದು ದೋಚಿ ಪರಾರಿಯಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಪ್ರೀತಿ ಅವರಲ್ಲಿ ರಟ್ಟಾಡಿ ಗ್ರಾಮದ ಎರಡು ಒಕ್ಕೂಟದಿಂದ ಸಂಗ್ರಹಿಸಿದ್ದ ಹಣ ಇತ್ತು ಎನ್ನಲಾಗಿದೆ. ಸೇವಾನಿರತರ ಕಚೇರಿಗೆ ಹೆಲ್ಮೆಟ್ ಹಾಕಿಕೊಂಡು ನುಗ್ಗಿದ ದರೋಡೆಕೋರರು ಪ್ರೀತಿಗೆ ಹಲ್ಲೆ ನಡೆಸಿ ಸುಮಾರು 2 ಲಕ್ಷ ರೂ. ದರೋಡೆಗೈದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಪ್ರೀತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story