ಕಾಸರಗೋಡು ಲೋಕಸೇವಾ ಕಚೇರಿಗೆ ಮುತ್ತಿಗೆ ಹಾಕಿದ ಡಿ ವೈ ಎಫ್ ಐ
ಕಾಸರಗೋಡು ,ಸೆ.25: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿ ವೈ ಎಫ್ ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾಸರಗೋಡು ಲೋಕಸೇವಾ ಕಚೇರಿ ( ಪಿ ಎಸ್ ಸಿ ) ಗೆ ಮುತ್ತಿಗೆ ಹಾಕಲಾಯಿತು.
ಸರಕಾರಿ ಕಚೇರಿಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಬೇಕು , ಖಾಲಿ ಹುದ್ದೆಗಳ ಬಗ್ಗೆ ಆಗಾಗ ವರದಿ ಸಲ್ಲಿಸಬೇಕು , ಅಡ್ವಾನ್ಸ್ ಮೆಮೋ ಲಭಿಸಿದ ಎಲ್ಲಾ ಉದ್ಯೋಗಾರ್ಥಿಗಳಿಗೆ ನೇಮಕಾತಿ ನೀಡಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಮಾಜಿ ಶಾಸಕ ಹಾಗೂ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ. ವಿ ಕುಞರಾಮನ್ ಉದ್ಘಾಟಿಸಿದರು .ಟಿ . ಕೆ ಮನೋಜ್ ಅಧ್ಯಕ್ಷತೆ ವಹಿಸಿದ್ದರು.
ಡಿ ವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಕೆ. ಮಣಿಕಂಠನ್ , ಪಿ . ಶಿವಪ್ರಸಾದ್ , ಟಿ .ಕೆ ಮನೋಜ್ , ಕೆ . ಜಯನ್, ಮೀರಾಚಂದ್ರನ್ , ಕೆ . ರಾಜು , ನಾಸರುದ್ದೀನ್ ಮೇಲಂಗರ ಮೊದಾಲದವರು ನೇತೃತ್ವ ನೀಡಿದರು.
Next Story