ನಾನು ಯಾವುದೇ ಹೇಳಿಕೆಯನ್ನು ನೀಡಿಲ್ಲ: ಡಾ.ಎನ್.ಶೈಲಜಾ ಸ್ಪಷ್ಟನೆ
ಡಿವೈಎಸ್ಪಿ ಗಣಪತಿ ಪ್ರಕರಣ
ಮಡಿಕೇರಿ, ನ.20: ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಗಣಪತಿ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಡಾ.ಎನ್.ಶೈಲಜಾ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.
"ಮರಣೋತ್ತರ ಪರೀಕ್ಷೆಯನ್ನು ಸರಕಾರ ಹೇಳಿದಂತೆ ಮಾಡಿದ್ದೇನೆ" ಎಂದು ಡಾ.ಎನ್.ಶೈಲಜಾ ಅವರು ಹೇಳಿಕೆ ನೀಡಿದ್ದಾರೆ ಎನ್ನುವ ದೃಶ್ಯ ಮಾಧ್ಯಮಗಳ ಸುದ್ದಿಯಿಂದಾಗಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಈ ಬಗ್ಗೆ ಡಾ.ಶೈಲಜಾ ಅವರನ್ನು ಪತ್ರಿಕೆ ಪ್ರಶ್ನಿಸಿದಾಗ "ನಾನು ಈ ರೀತಿಯ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಹೇಳುವ ಸ್ಥಿತಿಯಲ್ಲಿಯೂ ಇಲ್ಲ". ಕಳೆದ ವಾರ ಸಿಬಿಐ ಅಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆಯ ಅಗತ್ಯ ದಾಖಲೆಗಳನ್ನು ಒಪ್ಪಿಸಿದ್ದೇನಷ್ಟೆ. ಅಧಿಕಾರಿಗಳೊಂದಿಗೆ ಚರ್ಚಿಸಿದ ವಿಚಾರವನ್ನು ಕೂಡ ಹೇಳಲು ಸಾಧ್ಯವಿಲ್ಲವೆಂದು" ಸ್ಪಷ್ಟಪಡಿಸಿದ್ದಾರೆ.
Next Story