ಮಂಡ್ಯ: ಕಾರು ಢಿಕ್ಕಿಯಾಗಿ ವೃದ್ಧ ಮೃತ್ಯು; ಪಾನಮತ್ತ ಯುವಕರಿಗೆ ಗ್ರಾಮಸ್ಥರಿಂದ ಥಳಿತ
ಮಂಡ್ಯ, ಮೇ 13: ಕಾರು ಢಿಕ್ಕಿ ಹೊಡೆದು ವೃದ್ಧ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೊಸಬೂದನೂರು ಬಳಿ ರವಿವಾರ ಸಂಜೆ ನಡೆದಿದ್ದು, ಕಾರಿನಲ್ಲಿದ್ದ ಪಾನಮತ್ತ ಯುವಕರಿಗೆ ಗ್ರಾಮಸ್ಥರು ಥಳಿಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರು ಮೂಲದ ಯುವಕರು ಕುಡಿದು ಕಾರು ಚಾಲನೆ ಮಾಡುತ್ತಿದ್ದ ವೇಳೆ ರಸ್ತೆಬದಿ ಹೋಗುತ್ತಿದ್ದ ಗ್ರಾಮದ ವೃದ್ಧ ನಾಗಪ್ಪ(64) ಅವರಿಗೆ ಢಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಉದ್ರಿಕ್ತಗೊಂಡ ಗ್ರಾಮಸ್ಥರು ಕಾರಿನ ಗಾಜುಗಳನ್ನು ಪುಡಿಪುಡಿಗೊಳಿಸಿ ಯುವಕರಿಗೆ ಥಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರ ವಾಹನದ ಮೇಲೂ ಗ್ರಾಮಸ್ಥರು ದಾಳಿ ಮಾಡಿದರು ಎನ್ನಲಾಗಿದೆ.
ಇಬ್ಬರು ಯುವಕರನ್ನು ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story