ಮೈಸೂರು: ಸೊಸೆ ಹಂತಕನಿಗೆ ಜೀವಾವಧಿ ಶಿಕ್ಷೆ
ಮೈಸೂರು,ಮೇ.19: ಕಲ್ಲಿನಿಂದ ಸೊಸೆಯ ತಲೆಗೆ ಹೊಡೆದು ಕೊಲೆಗೈದಿದ್ದ ವ್ಯಕ್ತಿಗಗೆ ಇಲ್ಲಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.
ನಂಜನಗೂಡಿನ ಎರಡನೇ ಮುಖ್ಯರಸ್ತೆಯಲ್ಲಿನ ನಾಲ್ಕನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದ ಮಹಾದೇವು(70) ಶಿಕ್ಷೆಗೆ ಗುರಿಯಾದವ ವ್ಯಕ್ತಿ. ಮಹಾದೇವುರ ಮಗ ರವಿಕುಮಾರ್ ಮಂಜುಳಾ ಎಂಬಾಕೆಯನ್ನು 12 ವರ್ಷಗಳ ಹಿಂದೆ ವಿವಾಹವಾಗಿದ್ದ. ಮಹಾದೇವು ಸೊಸೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು. 2014ರ ಸೆಪ್ಟೆಂಬರ್ 12 ರಂದು ಬೆಳಿಗ್ಗೆ ಪಡಿತರ ಚೀಟಿ ಕೊಡಲಿಲ್ಲವೆಂದು ಸೊಸೆಯೊಂದಿಗೆ ಜಗಳವಾಡಿದ್ದ. ಮರುದಿನ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕಲ್ಲನ್ನು ಮಂಜುಳಾಲ ತಲೆ ಮತ್ತು ಮುಖಕ್ಕೆ ಎತ್ತಿ ಹಾಕಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಂಜುಳಾ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಳು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ನ್ಯಾಯಾಧೀಶ ಸಿ.ಎಂ.ಜೋಶಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 5000ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ನಾಗಪ್ಪ ಸಿ.ನಾಕಮನ್ ವಾದ ಮಂಡಿಸಿದ್ದರು.