ಕೆ.ಆರ್.ಪೇಟೆ: ಅಪರಿಚಿತ ಮಹಿಳೆ ಆತ್ಮಹತ್ಯೆ
ಕೆ.ಆರ್.ಪೇಟೆ, ಜೂ.24: ಬಾಡಿಗೆ ಮನೆಗೆ ಶನಿವಾರವಷ್ಟೇ ಬಂದಿದ್ದ ಮೈಸೂರು ಮೂಲದವರೆನ್ನಲಾದ ಅಪರಿಚಿತ ಮಹಿಳೆ ಇಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಅಗ್ರಹಾರ ಬಡಾವಣೆಯ ಸಿದ್ದವೀರಗೌಡರ ಭಾಗ್ಯಮ್ಮ ಅವರ ಮನೆಯಲ್ಲಿ ನಡೆದಿದೆ.
ತಾನು ಮೈಸೂರು ಎಂದು ಪರಿಚಯ ಮಾಡಿಕೊಂಡ ಸುಮಾರು 40ರ ಪ್ರಾಯದ ಮಹಿಳೆ, ಶನಿವಾರ ಬಾಡಿಗೆ ಮನೆಗೆ ಅಲೆಯುತ್ತಿದ್ದಾಗ ಭಾಗ್ಯಮ್ಮ ಖಾಲಿಯಿದ್ದ ಕೊಠಡಿಯನ್ನು ಬಾಡಿಗೆ ನೀಡಿದ್ದಾರೆ. ಆದರೆ, ಬೆಳಗಾಗುವುದರೊಳಗೆ ಆ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಭಾಗ್ಯಮ್ಮ ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆ ಪಿಎಸ್ಸೈ ಎಚ್.ಎಸ್.ವೆಂಕಟೇಶ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಮೃತ ಮಹಿಳೆ ಎಡಗೈ ಮೇಲೆ ಸುರೇಶ್ ಎಂಬ ಹಸಿರು ಹಚ್ಚೆ ಹಾಕಲಾಗಿದೆ. ವಾರಸುದಾರರಿದ್ದರೆ ಕೆ.ಆರ್.ಪೇಟೆ ಠಾಣೆ(ದೂ.08230-262248, ಮೊ.9480804859) ಸಂಪರ್ಕಿಸಬಹುದು.
Next Story