ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ
ಕೊಳ್ಳೇಗಾಲ,ಜು.27: ಕಾವೇರಿ ನದಿಯಲ್ಲಿ ಹಸು ತೊಳೆಯಲು ಹೋಗಿ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿಹೋದ ಘಟನೆ ತಾಲೂಕಿನ ಹಳೇಹಂಪಾಪುರದ ಬಳಿ ನಡೆದಿದೆ.
ತಾಲೂಕಿನ ಹಳೇಹಂಪಾಪುರ ಗ್ರಾಮದ ಬಲ್ಲಯ್ಯನ ಮಗ ಲಿಂಗಣ್ಣ(40) ಎಂಬವರು ನೀರುಪಾಲಾದ ವ್ಯಕ್ತಿ.
ಇಂದು ಬೆಳಿಗ್ಗೆ ಹಸುವನ್ನು ಮೇಯಿಸುವ ಸಲುವಾಗಿ ಗ್ರಾಮದ ಹೊರವಲಯದಲ್ಲಿರುವ ಕಾವೇರಿ ನದಿ ತೀರದ ಬಳಿ ತೆರಳಿದ್ದ ವ್ಯಕ್ತಿಯು ಹಸುವನ್ನು ತೊಳೆಯಲು ಹೋದ ಸಂದರ್ಭ ನೀರಿನ ಪ್ರಮಾಣ ಹೆಚ್ಚಾಗಿ ಕೊಚ್ಚಿ ಹೋಗಿದ್ದಾರೆ.
ಈ ಸಂಬಂಧ ಪ್ರಕರಣವನ್ನು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ.
Next Story