ತರೀಕೆರೆ: ಸೇತುವೆಯಿಂದ ಉರುಳಿಬಿದ್ದ ಲಾರಿ; ಇಬ್ಬರಿಗೆ ಗಂಭೀರ ಗಾಯ
ತರೀಕೆರೆ, ಆ.24: ಇಲ್ಲಿಗೆ ಸಮೀಪದ ಕಟ್ಟೆಹೊಳೆ ಕ್ರಾಸ್ ಎಂಬಲ್ಲಿ ಸೇತುವೆಯಿಂದ ಲಾರಿಯೊಂದು ಉರುಳಿ ಕೆಳಗೆ ಬಿದ್ದದ ಪರಿಣಾಮ, ಲಾರಿ ಚಾಲಕ ಸೇರಿದಂತೆ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರಲ್ಲಿರುವ ಕಟ್ಟೆಹೊಳೆ ಕ್ರಾಸ್ ಎಂಬಲ್ಲಿನ ಸೇತುವೆಯಲ್ಲಿ ಚಿತ್ರದುರ್ಗದಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದ್ದು, ಘಟನೆಯಲ್ಲಿ ಲಾರಿ ಚಾಲಕ ಚಿತ್ರದುರ್ಗದ ಬಸವರಾಜ್ ಹಾಗೂ ಹಾನಗಲ್ನ ಬಸವರಾಜ್ ಎಂಬವರು ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತೆಂದು ತಿಳಿದು ಬಂದಿದೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Next Story