ಓಮ್ನಿ ಪಲ್ಟಿ: ನಾಲ್ವರು ಗಂಭೀರ
ಸೊರಬ, ಆ.26: ನೂಲ ಹುಣ್ಣಿಮೆ ಪ್ರಯುಕ್ತ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಪೂಜೆಗೆಂದು ತೆರಳುತ್ತಿದ್ದ ಓಮಿನಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾದ ಘಟನೆ ಪಟ್ಟಣ ಸಮೀಪದ ಕೊಡಕಣಿ ಗ್ರಾಮದ ರೊಟ್ಟಿಕರೆ ತಿರುವಿನಲ್ಲಿ ರವಿವಾರ ಸಂಭವಿಸಿದೆ.
ಕೆಂಚಮ್ಮ, ಕಮಲಮ್ಮ, ಶಾಂತಮ್ಮ, ಚಂದ್ರಪ್ಪ ಅವರಿಗೆ ಗಭೀರ ಗಾಯಗಳಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಪ್ಪ ಸೇರಿದಂತೆ ಉಳಿದರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಚಂದ್ರಗುತ್ತಿ ರೇಣುಕಾಂಬ ದೇವರ ಪೂಜೆಗೆಂದು ಹೊರಟಾಗ ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ.
Next Story