ಹನೂರು: ಸಹಕಾರ ಸಂಘದ ಮಹಾ ಸಭೆ
ಹನೂರು,ಸೆ.24: ತಾಲೂಕಿನ ಭದ್ರನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವಸದಸ್ಯರ ಮಹಾ ಸಭೆ ಸರಸ್ವತಮ್ಮರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜು ರವರು 2017- 18 ನೇ ಸಾಲಿನ ಖರ್ಚು- ವೆಚ್ಚ ಓದಿ ಹೇಳಿದರು. ಸಂಘವು ನಿವ್ವಳ ಲಾಭ 94 ಸಾವಿರ ಗಳಿಸಿದ್ದು, ಜಿಲ್ಲಾ ಬ್ಯಾಂಕಿಗೆ ಕಳೆದ ಸಾಲಿನ 1 ಲಕ್ಷ ರೂ ಸಾಲ ಮರುಪಾವತಿ ಬಾಕಿ ಇದೆ ಎಂದು ತಿಳಿಸಿದರು ಹಾಗೂ 2018 ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿಗೆ ಅನುಮೋದನೆಯನ್ನು ಸಭೆಯಲ್ಲಿ ಪಡೆಯಲಾಯಿತು.
ಈ ಸಂದರ್ಭ ಸಂಘದ ನಿರ್ದೇಶಕರು, ಸದಸ್ಯ ರೈತರು ಭಾಗವಹಿಸಿದ್ದರು.
Next Story