ಮಂಡ್ಯ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಮಂಡ್ಯ, ಸೆ.27: ಸಾಲಬಾಧೆ ತಾಳಲಾರದೆ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ದಿವಗಂತ ಚಿಕ್ಕೋನು ಗೌರಮ್ಮ ದಂಪತಿ ಪುತ್ರ ಕುಮಾರ್(38) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಇವರಿಗೆ 2 ಎಕರೆ ಜಮೀನಿದ್ದು, 1 ಎಕರೆಯಲ್ಲಿ ರೇಷ್ಮೆ ಮತ್ತು 1 ಎಕರೆಯಲ್ಲಿ ಭತ್ತ ಕೃಷಿ ನಡೆಸಿದ್ದರು ಎನ್ನಲಾಗಿದೆ.
ಸೋಮನಹಳ್ಳಿಯ ಸಿಂಡಿಕೇಟ್ ಬ್ಯಾಂಕ್ನಲ್ಲಿ ಜಮೀನು ಮತ್ತು ಚಿನ್ನಾಭರಣ ಅಡಮಾನವಿಟ್ಟು 2.50 ಲಕ್ಷ ರೂ., ಸೋಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 50 ಸಾವಿರ ರೂ. ಹಾಗೂ 3 ಲಕ್ಷ ಕೈಸಾಲ ಮಾಡಿಕೊಂಡಿದ್ದು, ಬ್ಯಾಂಕ್ ನೊಟೀಸ್ ಬಂದಿತ್ತು ಎಂದು ತಿಳಿದು ಬಂದಿದೆ.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಸರಕಾರದಿಂದ ಪರಿಹಾರ ಕೊಡಿಸಿವ ಭರವಸೆ ನೀಡಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story