ಹರಪನಹಳ್ಳಿ: ನೇಣು ಬಿಗಿದು ರೈತ ಆತ್ಮಹತ್ಯೆ
ಹರಪನಹಳ್ಳಿ,ಅ.10: ಮಳೆ ಇಲ್ಲದೇ ಬೆಳೆ ಕೈಕೊಟ್ಟಿದ್ದರಿಂದ ನೊಂದ ರೈತನೊಬ್ಬ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯರಬಳ್ಳಿ ಗ್ರಾಮದಲ್ಲಿ ನಡೆದಿದೆ.
ಹರಪನಹಳ್ಳಿ ತಾ. ಯರಬಳ್ಳಿ ಗ್ರಾಮದ ರವಿ ನಾಯ್ಕ(40) ಆತ್ಮಹತ್ಯೆ ಮಾಡಿಕೊಂಡ ರೈತ. 15 ಎಕರೆ ಪ್ರದೇಶದಲ್ಲಿ ರವಿನಾಯ್ಕ ಮೆಕ್ಕೆಜೋಳ ಬೆಳೆದಿದ್ದರು. ಆರಂಭದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದ ಸಾಕಷ್ಟು ಬೆಳೆ ಕೈಸೇರಬಹುದೆಂಬ ನಿರೀಕ್ಷೆ ರವಿನಾಯ್ಕಗೆ ಇತ್ತು. ಆದರೆ, ನಂತರ ಮಳೆ ಕೈಕೊಟ್ಟಿದ್ದರಿಂದ ಸಾಲ ಮಾಡಿ ಬೆಳೆದ ಮೆಕ್ಕೆಜೋಳ ಒಣಗಿದ್ದರಿಂದ ಅವರು ತೀವ್ರ ಕಂಗಾಲಾಗಿದ್ದರು. ಸಾಲದ ಶೂಲದ ಭಯದಿಂದ ನೊಂದಿದ್ದ ಅವರು ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story