ನರಸಿಂಹರಾಜ ಒಡೆಯರ್ ಹಿರಿಯ ಸಹೋದರಿ ವಿಶಾಲಾಕ್ಷಿ ದೇವಿ ನಿಧನ
ವಿಜಯದಶಮಿ ದಿನವೇ ರಾಜ ಮನೆತನದಲ್ಲಿ ಎರಡು ಸಾವು
ವಿಶಾಲಾಕ್ಷಿ ದೇವಿ
ಮೈಸೂರು,ಅ.19: ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ವಿಶಾಲಾಕ್ಷಿ ದೇವಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಈ ಮೂಲಕ ರಾಜಮನೆತನಕ್ಕೆ ವಿಜಯದಶಮಿ ದಿನ ಎರಡೆರಡು ಸಾವು ನೋಡುವಂತಾಗಿದೆ. ಇಂದು ಬೆಳಗ್ಗೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚೆನ್ನಮ್ಮಣಿ ನಿಧನರಾಗಿದ್ದರು. ಸಂಜೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಅಕ್ಕ ವಿಶಾಲಾಕ್ಷಿ ದೇವಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಿಶಾಲಾಕ್ಷಿ ದೇವಿಯವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರಮೋದಾ ದೇವಿ ಒಡೆಯರ್ ತಾಯಿಯ ಅಂತ್ಯಕ್ರಿಯೆ ಮುಗಿಸಿ ಬೆಂಗಳೂರಿಗೆ ತೆರಳಿದ್ದಾರೆ.
Next Story