ಮಂಡ್ಯ, ನ.14: ಬಾಲಕನೊಬ್ಬ ಕಾಲು ತೊಳೆಯಲು ಹೋಗಿ ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.
ವಿನೋದ್ಕುಮಾರ್(15) ಕೊಚ್ಚಿಹೋದ ಬಾಲಕ. ಈತ ಹೇಮಾವತಿ ನದಿಯ ಮಂದಗೆರೆ ಬಲದಂಡೆ ನಾಲೆಗೆ ಕೈಕಾಲು ತೊಳೆಯಲು ಇಳಿದಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.