ನಂಜನಗೂಡು: ಬಾಲಕಿಯ ಕೊಲೆ ಪ್ರಕರಣ; ಮಹಿಳೆ, ಪ್ರಿಯಕರ ಸೆರೆ
ಮೈಸೂರು, ನ. 22: ನಂಜನಗೂಡಿನಲ್ಲಿ ಬಾಲಕಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿದ ಎಸ್ ಪಿ ಅಮಿತ್ ಸಿಂಗ್, ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕಿಯ ಸಂಬಂಧಿ ಸಿದ್ದರಾಜು ಮತ್ತು ಆತನ ಪ್ರಿಯತಮೆ ರಾಜಮ್ಮ ಎಂಬಾಕೆಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇವರಿಬ್ಬರ ನಡುವೆ ಅನೈತಿಕ ಸಂಬಂಧ ಇದ್ದು. ಘಟನೆ ದಿನ ಬಾಲಕಿ ಮನೆಯ ಪಕ್ಕದ ಬೇಲಿಯಲ್ಲಿ ಇಬ್ಬರು ಅನೈತಿಕವಾಗಿರುವುದನ್ನು ನೋಡಿದ್ದು, ಇದರಿಂದ ಗಾಬರಿಗೊಂಡ ರಾಜಮ್ಮ ನನ್ನ ಪತಿ ತಿಳಿದರೆ ನನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಿಯಕರನಿಗೆ ಹೇಳಿದ್ದಾಳೆ. ಇದರಿಂದ ಆತಂಕ ಕ್ಕೊಳಗಾದ ಸಿದ್ದರಾಜು ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಬಾಲಕಿಯ ಮನೆಯಲ್ಲಿ ಆಕೆಯ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ ಎಂದು ತಿಳಿಸಿದರು.
ಈ ಸಂದರ್ಭ ರಾಜಮ್ಮ ಕೂಡ ಸಹಕರಿಸಿದ್ದು, ಆಕೆಯನ್ನು ಕೂಡ ಬಂಧಿಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.
Next Story