ಮಂಡ್ಯ: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು
ಮಂಡ್ಯ, ಡಿ.10: ಅಪರಿಚಿತ ವ್ಯಕ್ತಿಯೋರ್ವ ಚಲಿಸುವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಗರದ ಡಿಸಿಸಿ ಬ್ಯಾಂಕ್ ಮುಂಭಾಗದ ರೈಲ್ವೆ ಸೇತುವೆ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಹಳಿ ದಾಟುತ್ತಿದ್ದ ಈತನಿಗೆ ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದು, ಮಂಡ್ಯ ರೈಲ್ವೆ ನಿಲ್ದಾಣದ ಪೊಲೀಸ್ ಹೊರ ಉಪಠಾಣೆಯ ಪೊಲೀಸರು ಮಹಜರು ನಡೆಸಿದ್ದು ಶವವನ್ನು ಮಿಮ್ಸ್ ನ ಶವಾಗಾರಕ್ಕೆ ರವಾನಿಸಿದ್ದಾರೆ.
ಮೃತ ವ್ಯಕ್ತಿಯು ಸುಮಾರು 35 ವರ್ಷದವನಾಗಿದ್ದು, ಬಲಗೈಯಲ್ಲಿ ಕೆಂಪುದಾರ ತೊಟ್ಟಿದ್ದಾನೆ. ತೋಳಿನಲ್ಲಿ ವಿನುತ, ಆರ್.ಶಾಸ್ತ್ರಿ, ಶಿವಲಿಂಗ, ಹಾವಿನ ಚಿತ್ರ ಹಾಗೂ ಎಡಗೈ ಮೇಲೆ ಕೆಂಪಮ್ಮ, ಎದೆಯಲ್ಲಿ ಹೃದಯದ ಹಚ್ಚೆ ಗುರುತುಗಳಿವೆ.
ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುವ ಈತನ ವಾರಸುದಾರರಿದ್ದಲ್ಲಿ ಮಂಡ್ಯ ರೈಲು ನಿಲ್ದಾಣದ ಹೊರ ಉಪಠಾಣೆ (ದೂ.08232-222340) ಸಂಪರ್ಕಿಸುವಂತೆ ಕೋರಲಾಗಿದೆ.
Next Story