ಮಂಡ್ಯ: ಬೈಕ್ನಿಂದ ಬಿದ್ದು ಯುವಕ ಮೃತ್ಯು
ಮಂಡ್ಯ, ಡಿ.18: ಬೈಕಿನಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಸಿಂಗನಹಳ್ಳಿ ಬಳಿ ಸೋಮವಾರ ರಾತ್ರಿ ನಡೆದಿದೆ.
ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ರಾಮನಾಯಕ ಅವರ ಪುತ್ರ ಆನಂದ(29) ಸಾವನ್ನಪ್ಪಿದ ಯುವಕನೆಂದು ಗುರುತಿಸಲಾಗಿದೆ.
ಆನಂದ ಭೇರ್ಯ ಗ್ರಾಮದಿಂದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ತನ್ನ ಹೀರೋಹೋಂಡ ಮೋಟಾರ್ ಬೈಕಿನಲ್ಲಿ ಬರುವಾಗ ಸಿಂಗನಹಳ್ಳಿ ಗ್ರಾಮದ ಬಳಿ ತಿರುವು ರಸ್ತೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಆನಂದಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story