ಬಸ್ ಗೆ ಢಿಕ್ಕಿಯಾಗಿ ಹೊತ್ತಿ ಉರಿದ ಬೈಕ್: ಸುಟ್ಟು ಕರಕಲಾದ ಸವಾರ
ಕೋಲಾರ,ಡಿ.26: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿ, ಬೈಕ್ ಸವಾರ ರಸ್ತೆಯಲ್ಲೇ ಸುಟ್ಟು ಕರಕಲಾದ ಘಟನೆ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೈನ್ ಶಾಲೆ ಬಳಿ ನಡೆದಿದೆ.
ಬಂಗಾರಪೇಟೆಯ ವಿವೇಕಾನಂದ ನಗರ ನಿವಾಸಿ ನೀರಜ್ (20) ರಸ್ತೆಯಲ್ಲೇ ಸುಟ್ಟು ಕರಕಲಾದ ಯುವಕ.
ಇಂದು ಬೆಳಗ್ಗೆ ನೀರಜ್ ತನ್ನ ಗೆಳೆಯನೊಂದಿಗೆ ಬೈಕ್ ನಲ್ಲಿ ವೇಗವಾಗಿ ಬರುವಾಗ ಅಪಘಾತ ಸಂಭವಿಸಿದ್ದು, ಪರಿಣಾಮ ಸ್ಥಳದಲ್ಲೇ ಬೈಕ್ ಹೊತ್ತಿ ಉರಿದು ನೀರಜ್ ಸುಟ್ಟು ಕರಕಲಾಗಿದ್ದಾನೆ. ಅದೃಷ್ಟವಶಾತ್ ಮತ್ತೊಬ್ಬ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story