ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯದ ಬಿಸಿಎ ವಿಭಾಗದಲ್ಲಿ 3ನೇ ರ್ಯಾಂಕ್
ಭಟ್ಕಳ, ಜ. 19: ಕರ್ನಾಟಕ ವಿಶ್ವವಿದ್ಯಾಲಯ 2018 ರಲ್ಲಿ ನಡೆದ ಬಿಸಿಎ ಪರೀಕ್ಷೆಯಲ್ಲಿ ಭಟ್ಕಳ ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಭಟ್ಟ ಶೇಕಡಾ 90.12 ಪಡೆದು ವಿಶ್ವವಿದ್ಯಾಲಯಕ್ಕೆ 3ನೇ ರ್ಯಾಂಕ್ ಪಡೆದಿರುತ್ತಾರೆ.
ತಿಮ್ಮಪ್ಪಯ್ಯ ಭಟ್ಟ ಹಾಗೂ ಕಲಾವತಿಯವರ ಪುತ್ರಿಯಾದ ಈಕೆ ಉತ್ತರ ಕನ್ನಡ ಜಿಲ್ಲೆಯ ಬಿಸಿಎ ವಿಭಾಗದಲ್ಲಿ ರ್ಯಾಂಕ್ ಪಡೆದ ಏಕೈಕ ವಿದ್ಯಾರ್ಥಿನಿ ಯಾಗಿದ್ದು, ಈ ಸಾಧನೆಯಿಂದಾಗಿ ಇಡೀ ಜಿಲ್ಲೆಯು ಹೆಮ್ಮೆ ಪಡುವಂತಾಗಿದೆ.
ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಗೂ ಭಾಜನರಾಗಿರುವ ಭಟ್ಕಳದ ಈ ಯುವ ಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.
Next Story