ವಿಜಯಪುರ: ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ
ವಿಜಯಪುರ,ಫೆ.11: ನಗರದ ಬಿ.ಆರ್ ಅಂಬೇಡ್ಕರ್ ವೃತದಲ್ಲಿರುವ ವಿಜಯಪುರ ಜಿಲ್ಲಾಧಿಕಾರಿ ಎಸ್. ಬಿ ಶೆಟ್ಟಣ್ಣವರ ನಿವಾಸದ ಕಂಪೌಂಡ್ ನಲ್ಲಿ ಬೆಳೆದಿದ್ದ 8ಕ್ಕೂ ಅಧಿಕ ಶ್ರೀ ಗಂಧದ ಗಿಡಗಳು ಕಳವಾಗಿದೆ ಎಂದು ತಿಳಿದುಬಂದಿದೆ.
ಕಳೆದ ಎರಡು ದಿನಗಳಿಂದ ಜಿಲ್ಲಾಧಿಕಾರಿಗಳು ದೆಹಲಿ ಪ್ರವಾಸದಲ್ಲಿದ್ದಾರೆ. ಬಂಗಲೆಗೆ ಡಿಆರ್ ಪೊಲೀಸ್ ಭದ್ರತೆ ಇದ್ದರೂ, ರಾತ್ರೀ ಇಡೀ ಪೊಲೀಸರ ಕಣ್ಗಾವಲಲ್ಲಿದ್ದರೂ ಶ್ರೀ ಗಂಧದ ಗಿಡಗಳು ಕಳ್ಳತನವಾಗಿದ್ದು ಸಾರ್ವಜನಿಕರಲ್ಲಿ ಅತಂಕ ಉಂಟು ಮಾಡಿದೆ.
ಗೊಲಗುಂಬಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.