ಕೊಪ್ಪ: ವಾಣಿಜ್ಯ ಅಂಗಡಿ ಮಳಿಗೆಗಳ ಮೇಲೆ ಐಟಿ ದಾಳಿ
ಚಿಕ್ಕಮಗಳೂರು, ಫೆ.12: ತೆರಿಗೆ ವಂಚನೆ ಹಾಗೂ ಜಿಎಸ್ಟಿ ವಂಚನೆ ಆರೋಪದ ಮೇರೆಗೆ ಕೊಪ್ಪ ಪಟ್ಟಣದ ಪ್ರತಿಷ್ಠಿತ ಎರಡು ಅಂಗಡಿ ಮಳಿಗೆಗಳ ಮೇಲೆ ಐಟಿ ಅಧಿಕಾರಿಗಳ ತಂಡ ಸೋಮವಾರ ರಾತ್ರಿ ದಿಢೀರ್ ದಾಳಿ ನಡೆಸಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ ವೇಳೆ ಜಿಲ್ಲೆಯ ಕೊಪ್ಪ ಪಟ್ಟಣದ ಚಿಕ್ಕಮಗಳೂರು ರಸ್ತೆಯಲ್ಲಿರುವ ಅನ್ನಪೂರ್ಣ ಸೆಲ್ಸ್ ಅಂಡ್ ಸರ್ವೀಸ್ ಹಾಗೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಮದ್ದಾಸ್ ಸೇಲ್ಸ್ ಕಾರ್ಪೊರೇಶನ್ ವಾಣಿಜ್ಯ ಅಂಗಡಿ ಮಳಿಗೆಗಳಿಗೆ ಏಕ ಕಾಲದಲ್ಲಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
ಈ ಎರಡು ವಾಣಿಜ್ಯ ಅಂಗಡಿ ಮಳಿಗೆಗೆಗಳು ಪಟ್ಟಣದ ಪ್ರತಿಷ್ಠಿತ ಅಂಗಡಿಗಳಾಗಿದ್ದು, ಇವುಗಳ ಮಾಲಕರು ಸರಕಾರಕ್ಕೆ ತೆರಿಗೆ ಹಾಗೂ ಜಿಎಎಸ್ಟಿ ಪಾವತಿಯಲ್ಲಿ ವಂಚನೆ ಮಾಡಿದ ಆರೋಪದ ಮೇರೆಗೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಅಧಿಕಾರಿಗಳ ತಂಡ ಅಂಗಡಿಗಳಲ್ಲಿ ತೆರಿಗೆ ವಂಚನೆ ಸಂಬಂಧ ಮಹತ್ವ ದಾಖಲೆ ಪತ್ರಗಳನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದ್ದು, ದಾಳಿ ಸಂಬಂಧ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.