ನೋಟ್ ಬ್ಯಾನ್ ನಿಂದ ಉಗ್ರವಾದ ಕಡಿಮೆಯಾಗುತ್ತೆ ಎಂದಿದ್ದರು ಮೋದಿ, ಆದರೇ ಈಗ ಆದದ್ದೇನು
ಸಿದ್ದರಾಮಯ್ಯ ಪ್ರಶ್ನೆ
ಮೈಸೂರು, ಫೆ.16: ಪುಲ್ವಾಮದಲ್ಲಿ ಉಗ್ರರು ನಡೆಸಿದ ವಿಧ್ವಂಸಕ ಕೃತ್ಯಕ್ಕೆ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಅಮಾನುಷ ಮತ್ತು ಹೇಯ ಕೃತ್ಯ. ಈ ಘಟನೆಗೆ ಕಾರಣರಾದವರಿಗೆ ತಕ್ಕ ಉತ್ತರ ನೀಡಲೇಬೇಕು, ಉಗ್ರವಾದಿ ತಾಣಗಳ ಮೇಲೆ ದಾಳಿ ನಡೆಸಿ ಅವರನ್ನು ನಾಶ ಮಾಡಬೇಕು ಎಂದು ಒತ್ತಾಯಿಸಿದರು.
ನೋಟ್ ಬ್ಯಾನ್ ಗೊಳಿಸಿದರೆ ಉಗ್ರವಾದ ಕಡಿಮೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೇ ಈಗ ಏನಾಯಿತು ಎಂದ ಸಿದ್ದರಾಮಯ್ಯ, ಈ ಘಟನೆಗೆ ಕೇಂದ್ರ ಗುಪ್ತಚರ ಇಲಾಖೆಯೇ ಕಾರಣ ಎಂದು ಪುನರುಚ್ಚರಿಸಿದರು.
ನಮ್ಮ ರಕ್ಷಣೆಗೆ ದೇಶ ಕಾಯುವ ಯೋಧರಿಗೆ ರಕ್ಷಣೆ ನೀಡಬೇಕು, ಉಗ್ರವಾದವನ್ನು ಮಟ್ಟಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.
Next Story