ಶಿಕ್ಷಣದಿಂದ ಮಾತ್ರ ಯಾವುದೇ ಸಮುದಾಯ ಮುಂದೆ ಬರಲು ಸಾಧ್ಯ: ಸಂಸದ ಧ್ರುವನಾರಾಯಣ್
ಹನೂರು,ಫೆ.17: ಶಿಕ್ಷಣದಿಂದ ಮಾತ್ರ ಯಾವುದೇ ಒಂದು ಸಮುದಾಯ ಮುಂದೆ ಬರಲು ಸಾಧ್ಯ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಬೇಕು ಎಂದು ಸಂಸದ ಧ್ರುವನಾರಾಯಣ್ ತಿಳಿಸಿದರು.
ಹನೂರು ಪಟ್ಟಣದ ಮಲೈಮಹದೇಶ್ವ ಕ್ರೀಡಾಂಗಣದಲ್ಲಿ ವನ್ನೀಕುಲ ಕ್ಷತ್ರೀಯ ಜಿಲ್ಲಾ ಸಂಘದ ವತಿಯಿಂದ ಆಯೋಜಿಸಿದ್ದ ವನ್ನೀಕುಲ ಕ್ಷತ್ರೀಯ ಸಮುದಾಯದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಎಷ್ಟೇ ಅಸ್ತಿ ಪಾಸ್ತಿಯನ್ನು ಗಳಿಸಿದರೆ ಗೌರವಿಲ್ಲ. ಶಿಕ್ಷಣ ಇದ್ದರೆ ಮಾತ್ರ ಗೌರವ. ಹಾಗಾಗಿ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದುಕೊಳ್ಳಬೇಕು. ಹಿಂದಿನ ಕಾಲದಲ್ಲಿ ಶಿಕ್ಷಣಕ್ಕೆ ಬೇಕಾದಂತಹ ಅವಕಾಶಗಳು ಕಡಿಮೆ ಇದ್ದವು ಎಂದು ಹೇಳಿದರು.
ಶಾಸಕ ಆರ್.ನರೇಂದ್ರ ಮಾತನಾಡಿ, ನಮ್ಮ ಹನೂರು ಕ್ಷೇತ್ರ ಒಂದು ಮಿನಿ ಭಾರತ ಇದ್ದ ಹಾಗೆ. ಏಕೆಂದರೆ ಹನೂರು ಕ್ಷೇತ್ರದಲ್ಲಿ ಜಾತಿ ಧರ್ಮ ಭೇದ ಭಾವವಿಲ್ಲ. ಎಲ್ಲಾ ಜಾತಿ ಧರ್ಮದವರು ಅನ್ಯೋನ್ಯವಾಗಿ ಹನೂರು ಕ್ಷೇತ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷ ರಾಜೇಂದ್ರ, ರಾಜ್ಯ ತಿಗಳ ಕ್ಷತ್ರೀಯ ಮಹಾಸಬಾ ಅಧ್ಯಕ್ಷ ಸುಬ್ಬಣ್ಣ, ರಾಜ್ಯಾದ್ಯಕ್ಷ ಜಯರಾಜ್, ಜೆಡಿಎಸ್ ಮುಖಂಡ ಎಂ.ಆರ್.ಮಂಜುನಾಥ್, ಬಿಬಿಎಂಪಿ ಸದಸ್ಯರಾದ ಎಂ.ಕೆ ಗುಣಶೇಖರ್, ರಾಮಕೃಷ್ಣ, ಡಿ.ಎಫ್.ಒ ರಮೇಶ್, ನಿವೃತ್ತ ಡೆಪ್ಯೋಟಿ ರಿಜಿಸ್ಟರ್ ಚಂದ್ರಶೇಖರಯ್ಯ, ಹನೂರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು ಹಾಗೂ ವನ್ನಿಕುಲ ಕ್ಷತ್ರೀಯ ಸಮುದಾಯದ ಅನೇಕರು ಹಾಜರಿದ್ದರು.