ಮುಂದುವರೆದ ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಫೆ.23: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ರಾಜ್ಯ ಸರಕಾರ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದು, ಶನಿವಾರವೂ ಮುಂದುವರಿಸಿದೆ.
ಶನಿವಾರ 4 ಮಂದಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ, 4 ಡಿವೈಎಸ್ಪಿ, 6 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ನಾಲ್ವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಕುಮಾರಸ್ವಾಮಿ(ಕೋಲಾರ), ಮಲ್ಲಿಕಾರ್ಜುನ ಬಾಲದಂಡಿ(ಹಾವೇರಿ), ಮಹಾನಿಂಗ ನಂದಗಾ(ಚಿತ್ರದುರ್ಗ), ಪ್ರಭಾಕರ ಬಾರ್ಕಿ(ಸಿಐಡಿ) ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಆರು ಉಪ ಪೊಲೀಸ್ ಅಧೀಕ್ಷಕರಾದ ಜನಾರ್ಧನ್-ಬಳ್ಳಾರಿ ನಗರ ಉಪ ವಿಭಾಗ, ಸಂತೋಷ್ ಬನಹಟ್ಟಿ-ಎಸಿಬಿ, ಭಾಸ್ಕರ್ ವಕ್ಕಲಿಗ- ಶಿರಸಿ ಉಪ ವಿಭಾಗ, ತಿಮ್ಮಯ್ಯ ಸಿ.ಇ-ಸಿಐಡಿ, ವೇಣುಗೋಪಾಲ ಬಿ.ಆರ್-ಮಾಗಡಿ ಉಪ ವಿಭಾಗ, ಚಿಕ್ಕಸ್ವಾಮಿ-ದಾವಣಗೆರೆ ಗ್ರಾ.ಉಪ ವಿಭಾಗಕ್ಕೆ ಹಾಗೂ ಡಿವೈಎಸ್ಪಿ ಅಧಿಕಾರಿಗಳಾದ ಬಸಪ್ಪಎಸ್.ಅಂಗಡಿ-ಚಿಕ್ಕಮಗಳೂರು ಉಪ ವಿಭಾಗ, ಚಂದ್ರಶೇಖರ್ ಎನ್.ಎಸ್-ಸಿಐಡಿ, ವೆಂಕಟಪ್ಪನಾಯಕ್-ಸಿಐಡಿ, ರಮೇಶ್ ಎನ್-ಹಿರಿಯೂರು ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಇದಲ್ಲದೆ, ಫೆ.20ರಂದು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದ ಮೂವರು ಇನ್ಸ್ಪೆಕ್ಟರ್ಗಳಾದ ಟಿ.ಮಹಾಂತೇಶ್-ಜೆಸ್ಕಾಂ ರಾಯಚೂರು, ಟಿ.ವೆಂಕಟಸ್ವಾಮಿ -ಕುಂದಗೋಳ ವೃತ್ತ, ಎಸ್.ಪರಮಶಿವಮೂರ್ತಿಯನ್ನು ಬಜ್ಪೆ ಪೊಲೀಸ್ ಠಾಣೆ, ಮಂಗಳೂರಿನಲ್ಲಿಯೇ ಮುಂದುವರೆಸಿದೆ. ಲೋಕಾಯುಕ್ತದಿಂದ ಸೊರಬ ವೃತ್ತಕ್ಕೆ ವರ್ಗಾವಣೆಯಾಗಿದ್ದ ಬಸವರಾಜ್ ಜಿ.ಪುಲಾರಿ ಅವರ ಅದೇಶವನ್ನು ರದ್ದುಗೊಳಿಸಿದೆ. ಚನ್ನೇಗೌಡ ಆರ್.ಜಿ-ಹಿರಿಯೂರು ವೃತ್ತ, ಲಿಂಗಪ್ಪ-ಐಎಸ್ಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.