ಗೃಹಿಣಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ
ಮಂಡ್ಯ, ಮಾ.11: ಮದ್ದೂರು ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಗೃಹಿಣಿಯೋರ್ವರು ಸೋಮವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಹಳ್ಳಿಕೆರೆ ಗ್ರಾಮದ ಪುಟ್ಟಸ್ವಾಮಿ ಲಕ್ಷಮ್ಮ ದಂಪತಿ ಮಗಳಾದ ಸುಧಾರಾಣಿ ಮೃತ ಮಹಿಳೆ. ಇವರಿಗೆ ಕಬ್ಬಾರೆ ಗ್ರಾಮದ ಸಿದ್ದರಾಜು ಅವರೊಂದಿಗೆ 3 ವರ್ಷಗಳ ಹಿಂದೆ ಮದುವೆಯಾಗಿತ್ತು. ದಂಪತಿಗರ ಒಂದೂವರೆ ವರ್ಷದ ಪವನ್ ಎಂಬ ಗಂಡು ಮಗ ಇದ್ದಾನೆ.
ಮಗಳು ಸುಧಾರಾಣಗೆ ಗಂಡನ ಮನೆಯವರು ವರದಕ್ಷಿಣೆ ತರುವಂತೆ ಆಗಾಗ ಪೀಡಿಸುತ್ತಿದ್ದು, ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಗಂಡ ಸಿದ್ದರಾಜು ಆಲಿಯಾಸ್ ಮೂಗಪ್ಪ, ಅತ್ತೆ ಪುಟ್ಟಮ್ಮ, ಮಾವ ಸಿದ್ದರಾಮ, ಸಂಬಂಧಿಕರಾದ ಮಾದಯ್ಯ, ರಾಮಕೃಷ್ಣ, ಚೌಡಮ್ಮ ಅವರು ಸೇರಿಕೊಂಡು ಕೊಲೆ ಮಾಡಿದ್ದಾರೆಂದು ತಂದೆ ಪುಟ್ಟಸ್ವಾಮಿ ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story