ದಾವಣಗೆರೆ: ಸಿಡಿಲು ಬಡಿದು ಬಾಲಕ ಸೇರಿ ಇಬ್ಬರಿಗೆ ಗಾಯ
ದಾವಣಗೆರೆ: ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ 8 ವರ್ಷದ ಬಾಲಕ ಸೇರಿ ಇಬ್ಬರಿಗೆ ಗಾಯಗಳಾದ ಘಟನೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಲೋಕಿಕೆರೆ ಗ್ರಾಮದ ಮಹಾಂತೇಶ್ ಎಂಬುವರ ಮನೆಗೆ ನಸುಕಿನ 5 ಗಂಟೆ ವೇಳೆ ಗುಡುಗು, ಗಾಳಿಯ ಆರ್ಭಟದ ಮಧ್ಯೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮನೆಯ ಗೋಡೆ ಪಕ್ಕವೇ ಮಲಗಿದ್ದ ಮಹಾಂತೇಶ್(45), ಪುತ್ರ ಜೀವನ್(8) ಗಾಯಗೊಂಡಿದ್ದು, ತಕ್ಷಣವೇ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮಹಾಂತೇಶ್ರ ಪತ್ನಿ, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ ಮಹಾಂತೇಶ, ಪುತ್ರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಂದಾಯ ಅಧಿಕಾರಿ ಕೆಂಚೇಗೌಡ, ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಹಾನಿ ಬಗ್ಗೆ ಪರಿಶೀಲಿಸಿದರು.
Next Story