ಜೋಕಾಲಿಯಾಡುತ್ತಿದ್ದ ಬಾಲಕಿಯ ಕುತ್ತಿಗೆಗೆ ಸೀರೆ ಸುತ್ತಿ ಮೃತ್ಯು
ಚಿಕ್ಕಮಗಳೂರು, ಜೂ.17: ಜೋಕಾಲಿಯಾಡುತ್ತಿದ್ದ ಬಾಲಕಿಯೋರ್ವಳ ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಉಸಿರು ಕಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಹುಕ್ಕುಂದ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತಪಟ್ಟ ಬಾಲಕಿಯನ್ನು ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಹುಕ್ಕುಂದ ಗ್ರಾಮದಲ್ಲಿ ನಾಲ್ಕನೆ ತರಗತಿ ಓದುತ್ತಿದ್ದ ಬಾಲಕಿ ನಿಸರ್ಗ(9) ಎಂದು ಗುರುತಿಸಲಾಗಿದೆ. ರವಿವಾರ ಶಾಲೆಗೆ ರಜೆ ಇದ್ದಿದ್ದರಿಂದ ಮನೆಯಲ್ಲಿದ್ದ ನಿಸರ್ಗ ಸಂಜೆ ವೇಳೆ ಮನೆಯಲ್ಲಿ ಸೀರೆಯೊಂದರಿಂದ ಕಟ್ಟಿದ್ದ ಜೋಕಾಲಿಯಾಡುತ್ತಿದ್ದಳು. ಈ ವೇಳೆ ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಬಾಲಕಿ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story