ಆನೆಯ ಮೇಲಿಂದ ಬಿದ್ದು ಮಾವುತ ಮೃತ್ಯು
ಮೈಸೂರು,ಜು.9: ಆನೆಯ ಮೇಲಿಂದ ಬಿದ್ದು ಮಾವುತರೋರ್ವರು ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೃತರನ್ನು ಅರಮೆಯ ಮಾವುತ ಕಾಳಪ್ಪ (38) ಎಂದು ಹೇಳಲಾಗಿದೆ. ಇವರು ಎಚ್.ಡಿ.ಕೋಟೆ ಹೊಸಹಳ್ಳಿ ಗ್ರಾಮದವರಾಗಿದ್ದು, ಅರಮನೆಯ ಸಾಕಾನೆ ರೂಬಿಯ ಮಾವುತರಾಗಿದ್ದರು. ಆನೆಯನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗುವಾಗ ತಲೆಸುತ್ತು ಬಂದು ಆನೆಯ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟುಬಿದ್ದಿದ್ದು, ತಕ್ಷಣ ಇವರನ್ನು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಆರಮನೆಯ ಜಾಮ್ದಾರ್ ನಂಜುಂಡ ಎಂಬುವವರು ದೂರು ನೀಡಿದ್ದಾರೆ. ಕಾಳಪ್ಪ ಸುಮಾರು ಇಪ್ಪತ್ತು ವರ್ಷಗಳಿಂದ ರೂಬಿಯನ್ನು ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
Next Story