ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ, ಸಚಿವರನ್ನಾಗಿ ಮಾಡಿ: ಬಿಜೆಪಿಗೆ ಡಿಕೆಶಿ ಸಲಹೆ
ಬೆಂಗಳೂರು, ಜು.29: ನಿಮನ್ನು ರಕ್ಷಣೆ ಮಾಡಿರುವ 15-16 ಜನರನ್ನು ನಿಮ್ಮ ಜೊತೆ ಸಂಪುಟಕ್ಕೆ ಸೇರಿಸಿಕೊಳ್ಳಿ, ನಿಮ್ಮ ಪಕ್ಷದವರನ್ನು ಮನವೊಲಿಸಿ, ಅವರಿಗೆ ಯಾವ ರೀತಿ ರಕ್ಷಣೆ ಮಾಡುತ್ತೀರೋ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಪರವಾಗಿ ನಿಂತವರಿಗೆ ಏನು ಮಾತು ಕೊಟ್ಟಿದ್ದೀರೋ, ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳುತ್ತಿದ್ರಿ, ಅದನ್ನು ಈಗ ಸಾಬೀತುಪಡಿಸಿ, ಒಳ್ಳೆಯ ಖಾತೆಗಳನ್ನು ಕೊಟ್ಟು ನಿಮ್ಮ ಜೊತೆ ಇಟ್ಟುಕೊಳ್ಳಿ ಎಂದರು.
ಅವರನ್ನು ತಬ್ಬಲಿ ಮಾಡಲು ಹೋಗಬೇಡಿ, ಅವರಿಗೆ ಕೃತಜ್ಞತೆ ಕೂಡ ಸಲ್ಲಿಸಿಲ್ಲ, ಈಗಲಾದರೂ ಅವರನ್ನು ಸಚಿವರನ್ನಾಗಿ ಮಾಡಿ ಕೃತಜ್ಞತೆ ಸಲ್ಲಿಸಿ ಎಂದು ಶಿವಕುಮಾರ್ ಹೇಳಿದರು.
Next Story