ತುಮಕೂರು: ಅತ್ಯಾಚಾರ ಆರೋಪಿಗೆ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ
ತುಮಕೂರು, ಆ.8: ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಅದಲಾಪುರ ಗ್ರಾಮದ ನಿವಾಸಿ ಆರೋಪಿಯಾದ ಮಂಜುನಾಥ್ಗೆ ತುಮಕೂರಿನ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತಾರಕೇಶ್ವರ ಗೌಡ ಪಾಟೀಲ್ ಅವರು 7 ವರ್ಷಗಳ ಸಾದಾ ಹಾಗೂ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: ಆರೋಪಿ ಮಂಜುನಾಥ್ ಆಗಸ್ಟ್ 29, 2015 ರಂದು ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅದಲಾಪುರ ಗ್ರಾಮಕ್ಕೆ ಕರೆಸಿಕೊಂಡು ಹೋಗಿ ಅತ್ಯಾಚಾರ ಮಾಡುವ ಉದ್ದೇಶದಿಂದ ಜಗಳ ಮಾಡಿ ತೆಂಗಿನ ಮಟ್ಟೆಯಿಂದ ಹೊಡೆದು ಹಲ್ಲೆ ಮಾಡಿದ್ದನು, ಬಳಿಕ ನಿತ್ರಾಣಗೊಂಡು ಪ್ರಜ್ಞೆ ತಪ್ಪಿದ್ದವಳ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದ ಬಗ್ಗೆ ತುಮಕೂರು ಗ್ರಾಮಾಂತರ ವೃತ್ತ ಸಿಪಿಐ ಪಿ.ರವಿ ತನಿಖೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಆರ್.ಟಿ. ಅರುಣ ವಾದ ಮಂಡಿಸಿದ್ದಾರೆ.
Next Story