ಮಂಡ್ಯದಲ್ಲೂ ಕಾರಿನ ಗಾಜು ಪುಡಿಗೈದ ನಟ ಹುಚ್ಚ ವೆಂಕಟ್ಗೆ ಥಳಿತ
ಮಂಡ್ಯ, ಸೆ.1: ನಟ ಹುಚ್ಚ ವೆಂಕಟ್ ನಗರದ ಹೊರವಲಯದ ಹೊಟೇಲ್ ಮುಂಭಾಗ ರವಿವಾರ ಬೆಳಗ್ಗೆ ಕಾರಿನ ಗಾಜು ಪುಡಿ ಮಾಡಿದ್ದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಥಳಿಸಿದ್ದಾರೆ.
ಬೆಂಗಳೂರು ಮೈಸೂರು ಹೆದ್ದಾರಿಯ ಹೊಟೇಲ್ ಒಂದರ ಮುಂಭಾಗ ಈ ಘಟನೆ ನಡೆದಿದ್ದು, ಹೊಟೇಲ್ ಮುಂಭಾಗ ನಿಲ್ಲಿಸಿದ್ದ ಕಾರ್ ಮೇಲೆ ಕಲ್ಲು ಎತ್ತಿ ಹಾಕಿ ಕಾರಿನ ಗಾಜು ಪುಡಿಗೈದ ನಟ ಹುಚ್ಚ ವೆಂಕಟ್ ಗೆ ಸಾರ್ವಜನಿಕರು ಥಳಿಸಿದ್ದಾರೆ.
ಪಾಂಡವಪುರ, ಕೊಡುಗು, ಮೈಸೂರಿನಲ್ಲಿ ರಂಪಾಟ ನಡೆಸಿ ಸುದ್ದಿಯಾಗಿದ್ದ ವೆಂಕಟ್, ಶನಿವಾರ ತಡರಾತ್ರಿ ಕಂಠಪೂರ್ತಿ ಕುಡಿದು ಹೊಟೇಲ್ನಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Next Story