ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ನಿಧನ
ಮಡಿಕೇರಿ, ಸೆ.7: ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಡಿಕೇರಿ ತಾಲೂಕಿನ ಕಡಗದಾಳು ನಿಸ್ತಂತು ರಿಪೀಟರ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಆರ್ಎಸ್ಐ ಚೆನ್ನಕೇಶವ ಬಿ.ಸಿ. (48) ಮೃತಪಟ್ಟಿದ್ದಾರೆ.
ಸೆ.2 ರಂದು ಕಾಡಾನೆ ದಾಳಿಗೆ ತುತ್ತಾಗಿದ್ದ ಚೆನ್ನಕೇಶವ ಬಿ.ಸಿ. ಅವರನ್ನು ತಕ್ಷಣ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆವಿಜಿ ಆಸ್ಪತ್ರೆ ಮತ್ತು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.6 ರಂದು ನಿಧನ ಹೊಂದಿದ್ದಾರೆ.
ಚೆನ್ನಕೇಶವ ಅವರು ಮೂಲತಃ ಸೋಮವಾರಪೇಟೆಯ ಶನಿವಾರ ಸಂತೆಯವರಾಗಿದ್ದು ಅವರು ಪೋಲಿಸ್ ಇಲಾಖೆಯಲ್ಲಿ 1996, ಜುಲೈ 1 ರಿಂದ ಸೇವೆಗೆ ಸೇರಿದ್ದರು. ಕಳೆದ 2 ವರ್ಷಗಳಿಂದ ಡಿಎಆರ್ ಕೇಂದ್ರ ಸ್ಥಾನದಲ್ಲಿ ಸಾಮಾನ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
Next Story